ಪ್ರಶ್ನೆ 103: ರಾಹು ಮತ್ತು ಶನಿ ಮಹಾದಶೆಯನ್ನು (ಜ್ಯೋತಿಷ್ಯದ ಪ್ರಕಾರ ಬಹಳ ಕಷ್ಟದ ಸಮಯವನ್ನು ಕೊಡುವಂತಹುದು) ಎದುರಿಸುವುದು ಹೇಗೆ?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ರಾಹುದಶೆ ಅಥವಾ ಶನಿದಶೆ ಕೆಟ್ಟದ್ದು ಎಂದು ಭಾವಿಸಬೇಡಿ. ನೀವು ಆಧ್ಯಾತ್ಮಿಕ ಹಾದಿಯಲ್ಲಿದ್ದರೆ ಮತ್ತು ನೀವು ನಿರಂತರವಾಗಿ ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರೆ, ಈ ಎಲ್ಲಾ ದಶೆಗಳು ನಿಮಗೆ ಒಳ್ಳೆಯದನ್ನೇ ಮಾಡುತ್ತವೆ.

ಜನರು ಶನಿದಶೆ ತುಂಬಾ ಕೆಟ್ಟದು ಎಂದು ಭಾವಿಸುತ್ತಾರೆ. ಶನಿದಶೆ ನಿಮ್ಮನ್ನು ಆಧ್ಯಾತ್ಮಿಕ ಹಾದಿಗೆ ತರುತ್ತದೆ. ನೀವು ಸಣ್ಣ ಸಣ್ಣ ವಿಷಯಗಳಲ್ಲಿ ಸಿಲುಕಿಕೊಂಡಿದ್ದರೆ, ಅದರಿಂದ ನಿಮ್ಮನ್ನು ಬಿಡಿಸಿ, ಆಧ್ಯಾತ್ಮಿಕ ಹಾದಿಯಲ್ಲಿರಿಸುತ್ತದೆ. ನೀವು ಈಗಾಗಲೇ ಜ್ಞಾನದ ಮಾರ್ಗದಲ್ಲಿದ್ದರೆ, ಶನಿದಶೆ ಯಾವುದೇ ತೊಂದರೆ ಕೊಡುವುದಿಲ್ಲ.

ಜೀವನದಲ್ಲಿ ಏರಿಳಿತಗಳು ಸಹಜ. ಕೆಲವು ಒಳ್ಳೆಯ ಸಂಗತಿಗಳು ಸಂಭವಿಸುತ್ತವೆ ಮತ್ತೆ ಕೆಲವು ನಿಮಗೆ ಇಷ್ಟವಿಲ್ಲದ್ದು ಏನಾದರೂ ಸಂಭವಿಸುತ್ತದೆ. ಆದರೆ ಪ್ರತಿಯೊಂದು ಘಟನೆಯೂ ನಿಮಗೆ ಬಲವಾಗಿ ಬೆಳೆಯಲು ಒಂದು ಅವಕಾಶವಷ್ಟೇ. ಆದ್ದರಿಂದ, ರಾಹುದಶೆ ಅಥವಾ ಶನಿದಶೆಯ ಬಗ್ಗೆ ಚಿಂತಿಸಬೇಡಿ.


ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಗುರುದೇವರ ಅಧಿಕೃತ ಬ್ಲಾಗ್ನಲ್ಲಿ ಈ ಲೇಖನಗಳನ್ನು ಓದಿ:

1. Remedy the effects of planets by going beyond time! : CLICK HERE TO READ





ಕಾಮೆಂಟ್‌ಗಳು