ನಾವು ನಿಯಮಿತವಾಗಿ ಸೇವಾ, ಸಾಧನೆ ಮತ್ತು ಸತ್ಸಂಗವನ್ನು ಅಭ್ಯಾಸ ಮಾಡಬೇಕು . ನಮ್ಮ ದೇಶಕ್ಕಾಗಿ ದೇಶಭಕ್ತಿ ಮತ್ತು ಸಮರ್ಪಣೆಯ ಬಲವಾದ ಪ್ರಜ್ಞೆಯನ್ನು ಹೊಂದಿರಬೇಕು. ನಮ್ಮ ಮನಸ್ಸಿನಲ್ಲಿ ಈ ಪ್ರಾಮಾಣಿಕ ಉದ್ದೇಶದಿಂದ, ನಾವೆಲ್ಲರೂ ಜೀವನದಲ್ಲಿ ಮುಂದೆ ಸಾಗೋಣ.
ನಾನು ಮೊದಲಿನಿಂದ ಈ ಕ್ಷಣದವರೆಗೆ ಹೇಳಿದ್ದನ್ನೆಲ್ಲ ನಿಮಗೆ ನನ್ನ ಸಂದೇಶವಾಗಿದೆ. ಯುವ ಪೀಳಿಗೆಗೆ ಮಾಲಿನ್ಯ, ಅಪರಾಧ ಮತ್ತು ಭ್ರಷ್ಟಾಚಾರದಿಂದ ಮುಕ್ತವಾಗಿರುವ ವಿಶಾಲವಾದ ಉತ್ತಮ ಜಗತ್ತನ್ನು ಉಡುಗೊರೆಯಾಗಿ ನೀಡುವತ್ತ ನಾವು ಕೆಲಸ ಮಾಡೋಣ. ಅವರು ಅದಕ್ಕೆ ಅರ್ಹರು! ನಮ್ಮ ಮುಂಬರುವ ಪೀಳಿಗೆಗೆ ನಾವು ಉತ್ತಮ ಸಮಾಜ, ಉತ್ತಮ ದೇಶ ಮತ್ತು ಉತ್ತಮ ಜಗತ್ತನ್ನು ನೀಡಬೇಕಾಗಿದೆ.
ನೀವು ಇಷ್ಟಪಡುವ ಯಾವುದೇ ಧರ್ಮ ಅಥವಾ ಧರ್ಮಗ್ರಂಥಗಳಿಂದ ಮಂತ್ರಗಳನ್ನು ಪಠಿಸಬಹುದು. ನಿಯಮಿತವಾಗಿ ಜಪಿಸುವುದರಿಂದ, ನಿಮ್ಮ ದೇಹವು ಬಲಗೊಳ್ಳುತ್ತದೆ. ನಿಮ್ಮ ಮನಸ್ಸು ಶಾಂತ ಮತ್ತು ಸಕಾರಾತ್ಮಕವಾಗುತ್ತದೆ . ಜೊತೆಗೆ ನಿಮ್ಮ ನಡವಳಿಕೆಯು ಸಾಮರಸ್ಯವನ್ನು ಪಡೆಯುತ್ತದೆ ಎಂದು ನೀವು ಕಾಣಬಹುದು. ಜನರೊಂದಿಗಿನ ನಿಮ್ಮ ಸಂಬಂಧಗಳು ಸುಧಾರಿಸುತ್ತವೆ ಮತ್ತು ಉತ್ತಮವಾಗುತ್ತವೆ. ನಿಮ್ಮ ಸಂವಹನ ಕಲೆ ಸಹ ಮಹತ್ತರವಾಗಿ ಸುಧಾರಿಸುತ್ತದೆ.
ನಿಮ್ಮ ಹೃದಯವು ಅರಳಿದಾಗ, ನಿಮ್ಮ ಎಲ್ಲಾ ಪ್ರಶ್ನೆಗಳು ಮತ್ತು ತೊಂದರೆಗಳು ಕಣ್ಮರೆಯಾಗುತ್ತವೆ. ನಿಮ್ಮ ಹೃದಯದಲ್ಲಿ ಮತ್ತು ಧ್ವನಿಯಲ್ಲಿ ಮಾಧುರ್ಯ ಇದ್ದಾಗ, ಎಲ್ಲರೂ ನಿಮಗೆ ಸೇರಿದವರಾಗಿರುತ್ತಾರೆ. ಯಾರೂ ನಿಮಗೆ ಅಪರಿಚಿತರಾಗಿ ಕಾಣಿಸುವುದಿಲ್ಲ ಎಂದು ನೀವು ನೋಡುತ್ತೀರಿ. ಇದು ಭಾರತದ ಬಗೆಗಿನ ವಿಶೇಷತೆಯಾಗಿದೆ ಮತ್ತು ಇದು ಜಗತ್ತಿಗೆ ಭಾರತದ ಸಂದೇಶವಾಗಿದೆ. ಆದ್ದರಿಂದ ನೀವು ಇದನ್ನು ಸಂದೇಶವಾಗಿ ಅಥವಾ ಆದೇಶದಂತೆ ತೆಗೆದುಕೊಳ್ಳಬಹುದು. ಆದರೆ ಜೀವನದಲ್ಲಿ ಆ ಮಾಧುರ್ಯ ಮತ್ತು ಸಾಮರಸ್ಯವನ್ನು ತರಲು ನೀವೆಲ್ಲರೂ ಪ್ರಯತ್ನಿಸಬೇಕು.
ಎಲ್ಲರಿಗೂ ಉತ್ತಮ ಜಗತ್ತನ್ನು ನಿರ್ಮಿಸುವ ತೀರ್ಮಾನಕ್ಕೆ ನಾವು ಬದ್ಧರಾಗಿರಬೇಕು. ನಮ್ಮಲ್ಲಿ ಬಹಳಷ್ಟು ಜನ ಈಗಾಗಲೇ ಇದಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿದಿದೆ. ಆದರೆ ಇಂದು ಈ ತೀರ್ಮಾನವನ್ನು ನಮ್ಮ ಜೀವನದ ಗುರಿಯಾಗಿಸುವ ಮತ್ತು ಈ ವಿಶ್ವದಲ್ಲಿ ಆಚರಣೆಯನ್ನಾಗಿ ಮಾಡಿಸುವ ಕಡೆಗೆ ನಮ್ಮ ಪ್ರತಿಜ್ಞೆಯನ್ನು ನೆರವೇರಿಸೋಣ .

ಕಾಮೆಂಟ್ಗಳು